ಭಾನುವಾರ, ಆಗಸ್ಟ್ 18, 2013


     ಹುಲಿ ಹಿಡಿದ ಕಡಸು........


       ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ರೂಪಾಂತರ ಯುವ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಈಗಾಗಲೇ ಯುವ ನಿರ್ದೇಶಕರಾದ ವಾದಿರಾಜ್ ,ನಂಜುಂಡೇಗೌಡ ,ಚೈತನ್ಯ ನಾಟಕ ನಿರ್ದೇಶಿಸಿದ್ದಾರೆ . ಗ್ರಾಮೀಣ  ಹಿನ್ನಲೆಯ ನಂಜುಂಡೇಗೌಡ  ಬೆಂಗಳೂರಿನ   ಖಾಸಗಿ ಸಂಸ್ಥೆಯಲ್ಲಿ ದುಡಿಯುತ್ತ ನಾಟಕದಲ್ಲಿ ಅಭಿನಯಿಸುವ ಆಸೆಯಿಂದ ಕಳೆದ ಆರು ವರ್ಷಗಳ ಹಿಂದೆ ರೂಪಾಂತರಕ್ಕೆ ಬಂದವರು . ಸಣ್ಣ ಪುಟ್ಟ ಪಾತ್ರಗಳಲ್ಲಿ    ಅಭಿನಯಿಸುತ್ತ  ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುವ ಮೂಲಕ ಪ್ರೇಕ್ಷಕರ ಮೆಚ್ಚುಗೆ ಗಳಿಸಿದವರು .  ಇದೀಗ  ಮೊದಲಬಾರಿಗೆ ಡಾ .ಡಿ . ಕೆ ಚೌಟರ ತುಳು ನಾಟಕದ  ಕನ್ನಡದ ಅನುವಾದ  ಹುಲಿ ಹಿಡಿದ ಕಡಸು ನಿರ್ದೇಶಿಸಿದ್ದಾರೆ . ಈ ನಾಟಕ ಹಲವಾರು ಯಶಸ್ವಿ ಪ್ರದರ್ಶನ ಗಳನ್ನು ಕಂಡಿದೆ .
ಮುಂಬೈ ಕರ್ನಾಟಕ ಸಂಘ ಆಯೋಜಿಸಿದ್ದ ಅಖಿಲ ಭಾರತ ಕುವೆಂಪು ಕನ್ನಡ ನಾಟಕ ಸ್ಪರ್ಧೆಯಲ್ಲಿ ಈ ನಾಟಕ ಸ್ಪರ್ಧಿಸಿ ಪ್ರಥಮ ಪಾರಿತೋಷಕ ಮತ್ತು ಅತ್ಯುತ್ತಮ ನಿರ್ದೇಶಕ ,ಅತ್ಯುತ್ತಮ ನಟ ,ನಟಿ ,ಫೋಷಕ ನಟ ,ನಟಿ ,ಅತ್ಯುತ್ತಮ ಸಂಗೀತ ,ಬೆಳಕು ,ವಸ್ತ್ರವಿನ್ಯಾಸ  ಹೀಗೆ ಎಂಟು ಪ್ರಶಸ್ತಿ ಗಳನ್ನೂ ಪಡೆದಿರುವ ಈ ನಾಟಕ ದಿನಾಂಕ ೨೧-೮-೧೩ ರ ಬುಧವಾರ ಹುಣ್ಣಿಮೆ ರಾತ್ರಿಯಂದು ಸಂಜೆ ೭ ಗಂಟೆಗೆ  ಕೋಲಾರದ ಶಿವ ಗಂಗೆಯ ತೇರಳ್ಳಿ ಬೆಟ್ಟದಲ್ಲಿರುವ  ಆದಿಮ ಸಾಂಸ್ಕೃತಿಕ ಕೇಂದ್ರದ ಬಯಲು ರಂಗ ಮಂದಿರದಲ್ಲಿ    ಪ್ರದರ್ಶನ ವಾಗುತಿದೆ .





  

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ